Urdu   /   English   /   Nawayathi

ಮತ್ತೆ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಹುನ್ನಾರ : ಹಿರೇಮಠ ಆರೋಪ

share with us

ಹುಬ್ಬಳ್ಳಿ: 16 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಬಲ್ಡೋಟಾ ಕಂಪನಿಯು ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಮತ್ತೆ ಹುನ್ನಾರ ನಡೆಸಿದ್ದು, ಸರ್ಕಾರದ ಮೇಲೆ ಒತ್ತಡ ತರುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಸಿಎಫ್​ಡಿ ಹಾಗೂ ಜನಾಂದೋಲನಗಳ ಮಹಾಮೈತ್ರಿಯ ಮುಖ್ಯಸ್ಥ ಎಸ್. ಆರ್ ಹಿರೇಮಠ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ. 8 ರಂದು ನಡೆದ ವೈಲ್ಡ್ ಲೈಫ್ ಬೋರ್ಡ್ ಸಮಿತಿ ಸಭೆಯಲ್ಲಿ ಕಪ್ಪತ್ತಗುಡ್ಡವನ್ನು ವನ್ಯ ಜೀವಿ ಧಾಮ ಎಂದು ಮುಂದುವರಿಸುವ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಕಪ್ಪತ್ತಗುಡ್ಡವನ್ನು ವನ್ಯ ಜೀವಿ ಧಾಮ ಎಂದು ಮುಂದುವರೆಸಲು ನಿರ್ಧರಿಸಿದೆ. ಇದನ್ನು ಸಿಎಫ್​ಡಿ ಕೂಡ ಸ್ವಾಗತಿಸುತ್ತದೆ ಎಂದರು. ಇದೇ ವೇಳೆ ವನ್ಯ ಜೀವಿ ಧಾಮವನ್ನಾಗಿ ಮುಂದುವರೆಸುವ ಸಲುವಾಗಿ ಕಳಿಸಿರುವ ನೋಟಿಫಿಕೇಷನ್ ಹಿಂಪಡೆಯಲು ಒತ್ತಾಯಿಸಿ ಜನರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಇಂತಹ ಪ್ರಯತ್ನಗಳನ್ನ ಕಂಪನಿ ಕೂಡಲೇ ಕೈಬಿಡಬೇಕೆಂದು ಹಿರೇಮಠ ಹೇಳಿದರು. ಬೆನಗಾನಹಳ್ಳಿಯಲ್ಲಿ 4 ಎಕರೆ 20 ಗುಂಟೆ ಗೋಮಾಳ ಭೂಮಿಯನ್ನು ಡಿ. ಕೆ. ಶಿವಕುಮಾರ್​ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ಖರೀದಿಸಿದ್ದು, ಇದರಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿರುವ ಬಿ. ಎಸ್. ಯಡಿಯೂರಪ್ಪ ಕೂಡಾ ಶಾಮಿಲಾಗಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ಈ ಪ್ರಕರಣ ಕುರಿತು ಸಿಎಫ್​ಡಿಯೂ ಎಸ್. ಎಲ್. ಡಿ‌ಯನ್ನು ಹಾಕಿದ್ದು, ಹೋರಾಟವನ್ನು ಮುಂದುವರಿಸಲಾಗುವುದು ಎಂದರು. ಈಗಾಗಲೇ ಡಿ.ಕೆ. ಶಿವಕುಮಾರ್​ರನ್ನು ತಿಹಾರ ಜೈಲಿನಲ್ಲಿ ಮುಂದುವರೆದಿದ್ದಾರೆ. ಜೊತೆಗೆ ಆದಾಯ ತೆರಿಗೆ ಹಾಗೂ ಇಡಿ ಡಿ.ಕೆ.ಸುರೇಶ ಅವರನ್ನು ಕೂಡ ತನಿಖೆಗೆ ಒಳಪಡಿಸಿದ್ದು ಸ್ವಾಗತರ್ಹ ಎಂದರು. ಇನ್ನೂ ಡಿ.ಕೆ. ಶಿ ಬ್ರದರ್ಸ್ ಹಾಗೂ ಕುಟುಂಬದವರ ಮೇಲೆ ಸಿ.ಟಿ.ಐಎಫ್ಐಆರ್ ದಾಖಲಿಸಿಕೊಂಡು ಸ್ವತಂತ್ರ ತನಿಖೆ ಆರಂಭಿಸುವಂತೆ ಒತ್ತಾಯಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا