Urdu   /   English   /   Nawayathi

ಭಾರತೀಯ ಕರಾವಳಿ ನೌಕಾಪಡೆಯವರಿಂದ ಭಟ್ಕಳದ 23 ಮೀನುಗಾರರ ರಕ್ಷಣೆ

share with us

ಭಟ್ಕಳ: 18 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಭಟ್ಕಳದ ಸಮುದ್ರದಲ್ಲಿ ಭಾರತೀಯ ಕರಾವಳಿಯ ನೌಕಾಪಡೆಯವರು ತನ್ನ ರಾಜ್ದೂತ್ ಹಡಗಿನ ನೆರವಿನಿಂದ 23 ಮೀನುಗಾರರನ್ನು ರಕ್ಷಿಸಿದ್ದಾರೆ. ಭಟ್ಕಳದಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿರುವ ಮಾವಿನಕುರ್ವೆ ಎಂಬಲ್ಲಿ ಇಂಜಿನ್ ಹಾಳಾಗಿ ನಿನ್ನೆಯಿಂದ ದೋಣಿಯೊಂದು ನಿಂತಿತ್ತು. ಕರ್ನಾಟಕ ಮತ್ತು ಗೋವಾಕ್ಕೆ ಸೇರಿದ ರಾಜ್ದೂತ್ ನೌಕಾಪಡೆಯ ಹಡಗು ಗಸ್ತು ನಡೆಸುತ್ತಿದ್ದ ವೇಳೆ ಇಂಜಿನ್ ಹಾಳಾಗಿ ನಿಂತಿದ್ದ ದೋಣಿಯನ್ನು ಕಂಡು ಸ್ಥಳಕ್ಕೆ ತಲುಪಿ ದೋಣಿ ದುರಸ್ತಿಪಡಿಸಲು ಬೇಕಾದ ಉಪಕರಣಗಳನ್ನು ದೋಣಿಯವರಿಗೆ ಕೊಟ್ಟರು. ಆದರೂ ಚಲಿಸದ ದೋಣಿಯನ್ನು ತಮ್ಮ ಹಡಗಿನ ನೆರವಿನಿಂದ ಭಟ್ಕಳ ಸಮುದ್ರ ತೀರಕ್ಕೆ ಎಳೆದು ತಂದಿದ್ದಾರೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا