Urdu   /   English   /   Nawayathi

ಬೆಂಗಳೂರಲ್ಲಿ ವಿಳಾಸ ಹುಡುಕುವಾಗ ಎಚ್ಚರ...! ವಿಡಿಯೋ

share with us

ಬೆಂಗಳೂರು: 18 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ವಿಳಾಸ ಹುಡುಕುತ್ತಿದ್ದ ವೃದ್ಧನೋರ್ವ ಖದೀಮನ ಬಳಿ ಹೋಗಿ ಹಣ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವೃದ್ಧನ ಬಳಿಯಿದ್ದ ಹಣವನ್ನು ಕಿತ್ತುಕೊಂಡು ಖತರ್​ನಾಕ್​ ಆಸಾಮಿವೋರ್ವ ಪರಾರಿಯಾಗಿರುವ ಘಟನೆ ಕಬ್ಬನ್​ಪೇಟೆ ಬಳಿ ನಡೆದಿದೆ. ನಗರದ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬನ್​ಪೇಟೆ ಬಳಿ ಸೆಪ್ಟೆಂಬರ್ 9ರ ಸಂಜೆ 6 ಗಂಟೆ ಸುಮಾರಿಗೆ ವೃದ್ಧ ಕಬ್ಬನ್​ಪೇಟೆ ಅಡ್ರೆಸ್ ಹುಡುಕುತ್ತಿದ್ದ. ವೃದ್ಧನ ಹಾವ-ಭಾವ ಗಮನಿಸಿದ ಆರೋಪಿ ಆತನೊಂದಿಗೆ ಮಾತುಕತೆ ಶುರು ಮಾಡಿದ್ದಾನೆ. ಬಳಿಕ ಅಡ್ರೆಸ್​ ಹೇಳ್ತಿನಿ ಅಂತ ಮನವೊಲಿಸಿ, ಅದು ಇದು ಅಂತ ಕಥೆ ಕಟ್ಟಿದ್ದಾನೆ. ಕೊನೆಗೆ ವೃದ್ಧನ ಬಳಿಯಿದ್ದ ಹಣ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸದ್ಯ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲಸೂರು ಗೇಟ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا