Urdu   /   English   /   Nawayathi

ಬಿಸಿಯೂಟದ ಕೊಠಡಿಯಲ್ಲಿ ಸಿಲಿಂಡರ್ ಸೋರಿಕೆ

share with us

ಕುಮಟಾ: 25 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನ ವಾಲಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಕೊಠಡಿಯಲ್ಲಿ ಶನಿವಾರ ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಯವರು ನಂದಿಸಿದರು. ವಾಲಗಳ್ಳಿ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ನಡೆಯುತ್ತಿದ್ದುದರಿಂದ 500 ಕ್ಕೂ ಹೆಚ್ಚು ಮಕ್ಕಳಿಗೆ ಅಡುಗೆ ಮಾಡುತ್ತಿದ್ದರು. ಹೀಗಾಗಿ ಬಿಸಿಯೂಟದ ಕೊಠಡಿಯಲ್ಲಿ ಮೂರು ಸಿಲಿಂಡರ್​ಗಳಿದ್ದು, ಒಂದು ಸಿಲಿಂಡರ್​ನ ಪೈಪ್​ನಿಂದ ಒಮ್ಮೆಲೆ ಅನಿಲ ಸೋರಿಕೆ ಶುರುವಾಗಿದೆ. ಇದರಿಂದ ಬೆಂಕಿ ಹೊತ್ತಿಕೊಂಡು ಕೊಠಡಿಯ ಛಾವಣಿ ಹೆಂಚಿಗೆ ಜ್ವಾಲೆ ತಗುಲಿ ಸಿಡಿಯಲಾರಂಭಿಸಿತ್ತು. ತಕ್ಷಣ ಮಕ್ಕಳನ್ನು ಹೊರಗೆ ಕಳುಹಿಸಲಾಯಿತು. ಮಾಹಿತಿ ಪಡೆದ ಕುಮಟಾ ಅಗ್ನಿಶಾಮಕ ದಳದವರು ಆಗಮಿಸಿ ಸಿಲಿಂಡರ್ ಸ್ಪೋಟಿಸುವ ಮುನ್ನವೇ ಬೆಂಕಿ ನಂದಿಸಿ ಸಿಲಿಂಡರ್​ಗಳನ್ನು ಸುರಕ್ಷಿತ ಸ್ಥಳಕ್ಕೆ ಒಯ್ದರು. ಇದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯಿಂದ ಶಾಲಾ ಕೊಠಡಿಗೆ ಹಾಗೂ ಬಿಸಿಯೂಟದ ಸಾಮಗ್ರಿಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ಬಿಇಒ ಎ.ಜಿ. ಮುಲ್ಲಾ, ಇಒ ಸಿ.ಟಿ. ನಾಯ್ಕ, ಅಕ್ಷರ ದಾಸೋಹ ಅಧಿಕಾರಿ ದೇವರಾಯ, ಪಿಎಸ್​ಐ ಸಂಪತ್, ಇಂಡೇನ್ ಗ್ಯಾಸ್​ನ ಮಾಲೀಕ ಮದನ ನಾಯಕ ಇತರರು ಭೇಟಿ ನೀಡಿ ಪರಿಶೀಲಿಸಿದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا