Urdu   /   English   /   Nawayathi

ಸಂತ್ರಸ್ತರ ನೆರವಿಗೆ ತೆರಳಿದ ಅಖಿಲ ಭಾರತ ಮಾನವೀಯತೆಯ ಸಂಘ ಭಟ್ಕಳ

share with us

ಭಟ್ಕಳ: 18 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕಳೆದ ಕೆಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಆದ ನಿರಂತರ ಮಳೆಯ ಪ್ರವಾಹದಿಂದ ಬಹಳಷ್ಟು ಗ್ರಾಮಗಳಲ್ಲಿ ತೊಂದರೆಯಾಗಿದ್ದು, ಕೆಲವರು ತಮ್ಮ ಮನೆ ಮಠ ಕಳೆದುಕೊಂಡಿದ್ದು, ಇನ್ನು ಕೆಲವರು ತಮ್ಮ ಅಂಗಡಿ ಹಾಗೂ ತಮ್ಮ ನಿತ್ಯ ಯೋಗದ ಆಯುಧಗಳನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ. ಸರ್ಕಾರದಿಂದ ಇವರಿಗೆ ಬಟ್ಟೆ, ಬರೆ, ಊಟ ಹಾಗೂ ವಸತಿಯ ವ್ಯವಸ್ಥೆಗಳನ್ನು ಮಾಡಲಾಯಿತು. ಮನೆ ಕಳೆದುಕೊಂಡವರು ಕೆಲವು ವಸತಿ ಗೃಹಗಳಲ್ಲಿ ತಮ್ಮ ಜೀವನ ನಡೆಸುತ್ತಿದ್ದು ಇನ್ನು ಕೆಲವರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅಂಕೋಲಾ ತಾಲೂಕಿನ ಅಗ್ರಗೋಣ್, ಹೊನ್ನಾವರ ತಾಲೂಕಿನ ವಲ್ಕಿಯ ಪ್ರದೇಶಗಳಲ್ಲಿಯೂ ಸಹ ಪ್ರವಾಹದಿಂದ ಬಹಳಷ್ಟು ನೋವು ನಷ್ಟಗಳಾಗಿದ್ದು, ಇದೇ ವೇಳೆ ಇವರ ನೆರವಿಗಾಗಿ ಮುಂದಾದ ಅಖಿಲ ಭಾರತ ಮಾನವೀಯತೆ ಸಂಘ ಭಟ್ಕಳದವರು ತೆರಳಿ ಸಂತ್ರಸ್ತರಿಗೆ ಪರಿಹಾರ ಕಿಟ್ ರೂಪದಲ್ಲಿ ಕೆಲವು ಬಟ್ಟೆ, ಅಡಿಗೆಯ ಪಾತ್ರೆಗಳು, ತಿಂಡಿ ತಿನಿಸುಗಳನ್ನು ವಿತರಿಸಿ ಮಾನವೀಯತೆಯನ್ನು ಮೆರೆದರು. ಸಂತ್ರಸ್ತರು ಇವರ ಕೊಡುಗೆಗಳನ್ನು ಸ್ವೀಕರಿಸಿ ನೀವು ನಮ್ಮ ಭಾಗ್ಯಕ್ಕೆ ದೇವರು, ನಮ್ಮ ಕಷ್ಟದಲ್ಲಿ ನೀವು ನಮ್ಮ ನೆರವಾಗಿದ್ದೀರಿ ಎಂದು ಕೃತಷ್ನತೆಗಳನ್ನು ಸಲ್ಲಿಸಿ ಸಂತೋಷ ವ್ಯಕ್ತಪಡಿಸಿದರು.  
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا