Urdu   /   English   /   Nawayathi

ಒಣ, ಹಸಿ ಮೇವಿನ ವ್ಯವಸ್ಥೆ ಮಾಡಲು ಒತ್ತಾಯ

share with us

ಕಾರವಾರ: 17 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಅಂಕೋಲಾ ತಾಲೂಕಿನ ಜಾನು ವಾರುಗಳಿಗೆ ಒಣ ಹಾಗೂ ಹಸಿ ಮೇವನ್ನು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮುಖಂಡರ ಜೊತೆಗೆ ಶುಕ್ರವಾರ ಡೋಂಗ್ರಿ ಪಂಚಾಯಿತಿ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಿಗೆ ಅವರು ಭೇಟಿ ನೀಡಿ ಪರಿಶೀಲಿಸಿದರು. ಅಂಕೋಲಾ ತಾಲೂಕಿನಲ್ಲಿ ಮೇವು ಸಿಗದ ಬಗ್ಗೆ ಕೇಳಿದ್ದೇನೆ. ತಕ್ಷಣ ಒಣ ಹಾಗೂ ಹಸಿ ಮೇವು ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಎಲ್ಲ ಕುಟುಂಬಗಳಿಗೆ ತಕ್ಷಣ 10 ಸಾವಿರ ಪರಿಹಾರ ವಿತರಿಸಬೇಕು. ಆಹಾರ ಸಾಮಗ್ರಿ ವಿತರಿಸುವ ವ್ಯವಸ್ಥೆಯಾಗಬೇಕು. ಹೆಬ್ಬುಳ ಪರಿಹಾರ ಕೇಂದ್ರ ಮುಂದುವರಿಸಲು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದರು. ಡೋಂಗ್ರಿ ಪಂಚಾಯಿತಿ ವ್ಯಾಪ್ತಿಯ ಸುಂಕಸಾಳ, ಹೆಗ್ಗಾರ,ವೈದ್ಯ ಹೆಗ್ಗಾರ, ಕೋನಾಳ ಸೇರಿ ವಿವಿಧ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಶಾಸಕ ಸತೀಶ ಸೈಲ್, ಕಾಂಗ್ರೆಸ್ ಮುಖಂಡರಾದ ರಮಾನಂದ ನಾಯಕ, ಉದಯ ನಾಯ್ಕ, ಜಿ.ಎಂ.ಶೆಟ್ಟಿ ಇದ್ದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا