Urdu   /   English   /   Nawayathi

ದ.ಕ ಮೂಲದ 19 ಮಂದಿ ಕುವೈತ್ ಸಂತ್ರಸ್ತರು ಇಂದು ಮುಂಬೈಗೆ

share with us

ಮಂಗಳೂರು18 ಜುಲೈ 2019 (ಫಿಕ್ರೋಖಬರ್ ಸುದ್ದಿ) ಕುವೈತ್‌ನಿಂದ ಭಾರತಕ್ಕೆ ಮರಳುವ ನಿಟ್ಟಿನಲ್ಲಿ 28 ಮಂದಿ ಸಂತ್ರಸ್ತ ಯುವಕರ ಪಾಸ್‌ಪೋರ್ಟ್ ಮತ್ತು ವಿಮಾನ ಪ್ರಯಾಣದ ಟಿಕೆಟನ್ನು ಭಾರತೀಯ ರಾಯಭಾರಿ ಕಚೇರಿಯ ದ್ವಿತೀಯ ಕಾರ್ಯದರ್ಶಿ ಸಿಬಿಯು ಹಸ್ತಾಂತರಿಸಿದ್ದಾರೆ. ಮಂಗಳವಾರ 15 ಮಂದಿಯ ಪಾಸ್‌ಪೋರ್ಟ್ ನೀಡಲಾಗಿತ್ತು.28 ಮಂದಿಯಲ್ಲಿ ಮಂಗಳೂರಿನ 7ಮಂದಿ,ಆಂಧ್ರಪ್ರದೇಶದ 15 ಮಂದಿ,ಮಹಾರಾಷ್ಟ್ರ ಮತ್ತು ತಮಿಳುನಾಡಿನ ಯುವಕರ ಪಾಸ್‌ಪೋರ್ಟ್ ಸೇರಿದೆ.ಈ ನಡುವೆ ದ.ಕ ಲದ 19 ಯುವಕರು ಬುಧವಾರ ರಾತ್ರಿ ಕುವೈತ್‌ನಿಂದ ಪ್ರಯಾಣ ಆರಂಭಿಸಿದ್ದು,ಗುರುವಾರ ಬೆಳಗ್ಗೆ ಮುಂಬೈ ತಲುಪುವ ನಿರೀಕ್ಷೆಯಿದೆ.ಅಲ್ಲಿಂದ ಬಸ್ ಮೂಲಕ ಶುಕ್ರವಾರ ಬೆಳಗ್ಗೆ ಮಂಗಳೂರು ತಲುಪಲಿದ್ದಾರೆ.ಎಲ್ಲ 19 ಮಂದಿಯ ವಿಮಾನ ಟಿಕೆಟ್ ಹಾಗೂ ಮಂಗಳೂರುವರೆಗಿನ ಬಸ್ ಟಿಕೆಟ್‌ಗೆ ಶಾಸಕ ವೇದವ್ಯಾಸ ಕಾಮತ್ ವ್ಯವಸ್ಥೆ ಮಾಡಿದ್ದಾರೆ. ಗುರುವಾರ ಮತ್ತೆ ಮೂರು ಮಂದಿ ಮಂಗಳೂರಿನವರು ಪ್ರಯಾಣ ಬೆಳೆಸಲಿದ್ದಾರೆ.ಶುಕ್ರವಾರ 7ಹಾಗೂ ಸೋಮವಾರ 19 ಮಂದಿ ಅನ್ಯ ರಾಜ್ಯದವರು ಭಾರತ ತಲುಪಲಿದ್ದಾರೆ ಎಂದು ಅನಿವಾಸಿ ಭಾರತೀಯ,ಇಂಜಿನಿಯರ್ ಮೋಹನ್‌ದಾಸ್ ಕಾಮತ್ ವಿಜಯವಾಣಿಗೆ ತಿಳಿಸಿದ್ದಾರೆ. 

ಶಾಸಕರಿಗೆ ಶ್ಲಾಘನೆ:ಯುವಕರ ಬಿಡುಗಡೆ ವಿಚಾರದಲ್ಲಿ ತಕ್ಷಣ ಸ್ಪಂದಿಸಿರುವ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರ ಕಾರ್ಯವೈಖರಿಯನ್ನು ಭಾರತೀಯ ರಾಯಭಾರಿ ಕಚೇರಿಯ ದ್ವಿತೀಯ ಕಾರ್ಯದರ್ಶಿ ಸಿಬಿಯು. ಶ್ಲಾಘಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا