Urdu   /   English   /   Nawayathi

ಇಂದು ವಿಚಾರಣೆಗೆ ಬರಲಾಗುತ್ತಿಲ್ಲ: ಸ್ಪೀಕರ್​​​ಗೆ ಸಮಯಾವಕಾಶ ಕೇಳಿದ ಅತೃಪ್ತ ಶಾಸಕರು

share with us

ಬೆಂಗಳೂರು: 15 ಜುಲೈ 2019 (ಫಿಕ್ರೋಖಬರ್ ಸುದ್ದಿ) ರಾಜೀನಾಮೆ ಪತ್ರ ಸಂಬಂಧ ಇಂದು ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು‌ ಅತೃಪ್ತ ಶಾಸಕ ರಾಮಲಿಂಗಾರೆಡ್ಡಿ ಸ್ಪೀಕರ್​​ಗೆ ಕರೆ ಮಾಡಿ ತಿಳಿಸಿದ್ದಾರೆ. ಕಣ್ಣಿನ ತಪಾಸಣೆ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನೊಂದು ದಿನ ಬರುತ್ತೇನೆ ಎಂದು ಕರೆ ಮಾಡಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಚಾರಣೆಗೆ ಇನ್ನೊಂದು ಸಮಯವನ್ನು ನಿಗದಿಗೊಳಿಸುತ್ತೇನೆ. ಅವತ್ತು ಬನ್ನಿ ಎಂದು ಸ್ಪೀಕರ್ ಅವರು ರಾಮಲಿಂಗಾರೆಡ್ಡಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಹಾಜರಾಗಬೇಕಾಗಿದ್ದ ಮುಂಬೈನಲ್ಲಿರುವ ಅತೃಪ್ತ ಶಾಸಕ ಜೆಡಿಎಸ್​​ನ ಗೋಪಾಲಯ್ಯ ಅವರೂ ವಿಧಾನಸಭೆ ಕಾರ್ಯದರ್ಶಿಗೆ ಕರೆ ಮಾಡಿ ತಮಗೆ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಆದರೆ ಏಕೆ ಬರಲಾಗುತ್ತಿಲ್ಲ ಎಂಬ ಬಗ್ಗೆ ಯಾವುದೇ ಕಾರಣವನ್ನು ತಿಳಿಸಿಲ್ಲ ಎನ್ನಲಾಗಿದೆ.

ಜುಲೈ 17ಕ್ಕೆ ಮೂವರು ಅತೃಪ್ತರಿಗೆ ವಿಚಾರಣೆಗೆ ಬರಲು ಸೂಚನೆ:

ಇನ್ನು ಮೂವರು ಅತೃಪ್ತ ಶಾಸಕರಾದ ಸುಧಾಕರ್, ಎಂಟಿಬಿ ನಾಗರಾಜ್ ಹಾಗೂ ರೋಷನ್ ಬೇಗ್ ಅವರಿಗೆ ಜುಲೈ 17ಕ್ಕೆ ವಿಚಾರಣೆಗೆ ಬರಲು ಸ್ಪೀಕರ್ ಸೂಚನೆ ನೀಡಿದ್ದಾರೆ. ಈ ಮೂವರು ಶಾಸಕರು ಖುದ್ದು ಸ್ಪೀಕರ್​​ರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ನೀಡಿದ್ದರು. ಈ ಶಾಸಕರಿಗೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ಸೂಚನೆ ನೀಡಿದ್ದಾರೆ.

15 ಜುಲೈ 2019 (ಫಿಕ್ರೋಖಬರ್ ಸುದ್ದಿ)

Prayer Timings

Fajr فجر
Dhuhr الظهر
Asr أسر
Maghrib مغرب
Isha عشا