Urdu   /   English   /   Nawayathi

ಗೋವು ಕಳ್ಳತನ ಮಾಡಲು ಹೋಗಿ ಗೋವಿನಿಂದಲೇ ದುರಂತ ಸಾವಿಗೀಡಾದ ಕಳ್ಳ!

share with us

ಹಾಸನ: 24 ಜೂನ್ 2019 (ಫಿಕ್ರೋಖಬರ್ ಸುದ್ದಿ) ಗೋವು ಕಳ್ಳತನ ಮಾಡಲು ಹೋಗಿ ವ್ಯಕ್ತಿಯೋರ್ವ ಗೋವಿನಿಂದಲೇ ಸಾವಿಗೀಡಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಮೃತ ಗೋವಿಂದಪ್ಪ ತೋಟದ ಮನೆಯಲ್ಲಿದ್ದ ಹಸುವನ್ನು ಕಳ್ಳತನ ಮಾಡಿ ಸುಮಾರು ಎರಡು ಕಿ.ಮೀ. ದೂರ ಸಾಗಿಸಿದ್ದ. ಈ ವೇಳೆ ನಿರ್ಜನ ಪ್ರದೇಶದಲ್ಲಿ ಗೋವಿನ ಕಾಲನ್ನು ಕಟ್ಟಲು ಮುಂದಾದಾಗ ಆತನ ಮರ್ಮಾಂಗಕ್ಕೆ ಗೋವು ಒದ್ದಿರುವ ಪರಿಣಾಮ ಸ್ಥಳದಲ್ಲೇ ಆತ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗಿದೆ. ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದೆ ಎನ್ನಲಾಗಿದ್ದು, ಘಟನೆ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا