Urdu   /   English   /   Nawayathi

ನಿಧಿಗಾಗಿ ಬಸವನ ವಿಗ್ರಹ ಭಗ್ನ: ಆರೋಪಿಗಳು ಅಂದರ್​​

share with us

ಹುಬ್ಬಳ್ಳಿ: 16 ಜೂನ್ 2019 (ಫಿಕ್ರೋಖಬರ್ ಸುದ್ದಿ) ಬೂದನಗುಡ್ಡ ಬಸವೇಶ್ವರ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಣ ಚಂದುನವರ್, ಲಾಲಸಾಬ್ ಬಾವಿ, ಮಹಾಂತೇಶ ಮಾಳಗಿ, ಶಿವರಾಜ್ ಜೀವಕನವರ್, ನಾಗರಾಜ್ ಚೌಡಣ್ಣವರ್, ಸಿದ್ದರಾಮ ಮರದಣ್ಣವರ್, ರವಿ‌ ಕೋಳೂರ್, ಮಂಜುನಾಥ ಮೊಸಳಣ್ಣವರ್ ಬಂಧಿತರು. ಬಸವೇಶ್ವರ ಮೂರ್ತಿಯ ಹಣೆಯಲ್ಲಿ ಅಪಾರ ಪ್ರಮಾಣದ ನಿಧಿ ಇದೆ ಎಂದು ಮೇ 28 ರಂದು ಆರೋಪಿಗಳು ಮೂರ್ತಿಯನ್ನು ಭಗ್ನಗೊಳಿಸಿ ಪರಾರಿಯಾಗಿದ್ದರು. ಇವರನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ವಿಚಾರಣೆ ನಡೆಸಿದಾಗ, ಬಸವವೇಶ್ವರ ಮೂರ್ತಿಯ ಹಣೆಯಲ್ಲಿ ಅಪಾರ ಪ್ರಮಾಣದ ಬೆಲೆಬಾಳುವ ಹವಳದ ವಜ್ರ, ಮುತ್ತು ಇವೆ ಎಂಬ ನಂಬಿಕೆಯಿಂದ ಈ ಕೃತ್ಯ ಎಸಗಿದ್ದಾಗಿ‌ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا