Urdu   /   English   /   Nawayathi

ವೈದ್ಯರ ಬೇಡಿಕೆಗಳಿಗೆ ಅಸ್ತು,ಯಾರ ಮೇಲೂ ಕ್ರಮವಿಲ್ಲ: ಕೆಲಸಕ್ಕೆ ಹಾಜರಾಗಲು ಮಮತಾ ಮನವಿ

share with us

ಕೋಲ್ಕತ್ತಾ: 16 ಜೂನ್ 2019 (ಫಿಕ್ರೋಖಬರ್ ಸುದ್ದಿ) ದೇಶವ್ಯಾಪಿ ನಡೆಯುತ್ತಿರುವ ವೈದ್ಯರ ಮುಷ್ಕರ ವಿಕೋಪಕ್ಕೆ ತಿರುಗುವ ಮುನ್ನವೇ ಎಚ್ಚೆತ್ತುಕೊಂಡ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ವೈದ್ಯರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಭಟನಾ ನಿರತ ವೈದ್ಯರ ಎಲ್ಲಾ ಬೇಡಿಕೆಗಳನ್ನು ನಾವು ಈಡೇರಿಸುತ್ತೇವೆ. ಈಗಾಗಲೇ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೆ ವೈದ್ಯರೊಂದಿಗೆ ಚರ್ಚೆ ನಡೆಸಲು ತಿಳಿಸಿದ್ದೇನೆ. ನಿನ್ನೆ ಹಾಗೂ ಇವತ್ತು ಅವರು ಐದು ಗಂಟೆಗಳ ಕಾಲ ಕಾದರೂ, ವೈದ್ಯರ ನಿಯೋಗ ಭೇಟಿಯಾಗಿಲ್ಲ. ಸಾಂವಿಧಾನಿಕ ಸಂಸ್ಥೆಗೆ ಅವರು ಗೌರವ ನೀಡಬೇಕಿತ್ತು ಎಂದರು. ಇನ್ನಾದರೂ ವೈದ್ಯರು ತಮ್ಮ ವೃತ್ತಿಗೆ ಹಿಂದಿರುಗಬೇಕಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಸಾವಿರಾರು ಜನರು ಕಾಯುತ್ತಿದ್ದಾರೆ ಎಂದರು. ಶೀಘ್ರದಲ್ಲಿ ವೈದ್ಯಕೀಯ ಸೇವೆಗಳನ್ನು ಎಂದಿನಂತೆ ಒದಗಿಸಲು ರಾಜ್ಯ ಸರ್ಕಾರ ಶ್ರಮಿಸಲಿದೆ. ಜೂನ್ 10ರಂದು ವೈದ್ಯನ ಮೇಲೆ ನಡೆದ ಹಲ್ಲೆ ಖಂಡನೀಯ. ಈ ಬಗ್ಗೆ ಪರಿಹಾರ ಕಾಣಲು ನಿರಂತರವಾಗಿ ಯತ್ನಿಸುತ್ತಿದ್ದೇವೆ. ಹಲ್ಲೆಗೊಳಗಾದ ವೈದ್ಯರ​ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಭರವಸೆ ಕೊಟ್ಟರು. ಪ್ರತಿಭಟನೆ ನಡೆಸಿದ ಯಾವುದೇ ವ್ಯಕ್ತಿಯನ್ನು ನಾವು ಬಂಧಿಸಿಲ್ಲ. ಯಾರ ಮೇಲೂ ಕಾನೂನು ಕ್ರಮ ಜರುಗಿಸಿಲ್ಲ. ವೈದ್ಯಕೀಯ ಸೇವೆಗಳು ಸರಿಹೋಗಬೇಕಾದ ಕಾರಣ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಸಹ ಮುಂದಾಗುತ್ತಿಲ್ಲ ಎಂದರು. ಇನ್ನು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯಡಿ ಯಾವುದೇ ಕೇಸು ದಾಖಲಿಸುತ್ತಿಲ್ಲ ಎಂದು ಸಿಎಂ ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا