Urdu   /   English   /   Nawayathi

ಬೀಡಾಡಿ ಗೂಳಿ ತಿವಿದರೆ ಯೋಗಿ ವಿರುದ್ಧ ಕೇಸ್‌ ಹಾಕಿ : ಅಖಿಲೇಶ್‌

share with us

ಲಕ್ನೋ: 04 ಮೇ (ಫಿಕ್ರೋಖಬರ್ ಸುದ್ದಿ) ಯಾರಿಗಾದರೂ ಬೀದಿ ಬಳಿ ಗೂಳಿ ತಿವಿದು ಗಾಯಗೊಳಿಸಿದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ. ಬಾರಾಬಂಕಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಖಿಲೇಶ್‌ ಯಾದವ್‌, ಗೂಳಿ ಯಾರ ಮೇಲಾದರೂ ದಾಳಿ ಮಾಡಿದರೆ ಯಾವ ಸೆಕ್ಷನ್‌ ಅನ್ವಯ ಕೇಸ್‌ ದಾಖಲಿಸಿಕೊಳ್ಳಬೇಕು .ಯಾವ ರೀತಿ ಎಫ್ಐಆರ್‌ ದಾಖಲಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಕನೌಜ್‌ನ ಎಸ್‌ಪಿ -ಬಿಎಸ್‌ಪಿ ಘಟಬಂಧನ್‌ನ ಸಾಮಾವೇಶದಲ್ಲಿ ಗೂಳಿಯೊಂದು ನುಗ್ಗಿ ಕೋಲಾಹಲಕ್ಕೆ ಕಾರಣವಾಗಿತ್ತು. ಘಟನೆ ಬಳಿಕ ಯೋಗಿ ಆದಿತ್ಯನಾಥ್‌ ಅವರು ಕನೌಜ್‌ನ ಸಾಮಾವೇಶದಲ್ಲಿ ಎಸ್‌ಪಿ -ಬಿಎಸ್‌ಪಿ ಘಟಬಂಧನ್‌ನ ಕೋಟೆಯೊಳಗೆ ಗೂಳಿ ನುಗ್ಗಿದ್ದು,ಅಪರಾಧಿಗಳನ್ನು ಕ್ಷಮಿಸಲು ಅದು ತಯಾರಿಲ್ಲ ಎಂದಿದ್ದರು. ಯೋಗಿ ಹೇಳಿಕೆಗೆ ಅಖಿಲೇಶ್‌ ತಿರುಗೇಟು ನೀಡಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا