Urdu   /   English   /   Nawayathi

ಗಂಡ-ಹೆಂಡ್ತಿ ಜಗಳದಲ್ಲಿ ಸುಟ್ಟು ಕರಕಲಾದವು ಮುದ್ದಾದ ಕಂದಮ್ಮಗಳು!

share with us

ಕರ್ನೂಲ್​: 24 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಗಂಡ-ಹೆಂಡ್ತಿ ಜಗಳ ಉಂಡು ಮಲಗೋ ತನಕ ಅಂತಾರೇ ಹಿರಿಯರು. ಆದ್ರೆ ಇಲ್ಲಿ ಇವರ ಜಗಳ ಇಬ್ಬರು ಮಕ್ಕಳನ್ನು ಬಲಿ ಪಡೆದಿದೆ. ಹೌದು, ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯ ಮಸಿದುಪುರಂ ಗ್ರಾಮದಲ್ಲಿ. ಈ ಗ್ರಾಮದ ನಿವಾಸಿ ನರಸಿಂಹಲು, ಪದ್ಮಾವತಿ ದಂಪತಿಗೆ ಮನೋಜ್​ ಕುಮಾರ್​ (5), ಸಂಜೀವ್​ (4) ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದರು. ಆದ್ರೆ ಗಂಡ-ಹೆಂಡ್ತಿ ಪದೆ ಪದೇ ಕಿತ್ತಾಡಿಕೊಳ್ಳುತ್ತಿದ್ದರು. ಬುಧವಾರ ಬೆಳಗ್ಗೆ ಗಂಡ-ಹೆಂಡ್ತಿ ಮತ್ತೆ ಕಿತ್ತಾಡಿಕೊಂಡಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ನರಸಿಂಹಲು ಕೆಲಸಕ್ಕೆಂದು ತೆರಳಿದ್ದ ವೇಳೆ ಪದ್ಮಾವತಿ, ಮಲಗಿದ್ದ ತನ್ನಿಬ್ಬರ ಮಕ್ಕಳ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾಳೆ. ಬಳಿಕ ತಾನೂ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾದಾಗ ಸ್ಥಳೀಯರು ಕಾಪಾಡಿದ್ದಾರೆ. ಬೆಂಕಿಯಿಂದ ನರಳುತ್ತಿದ್ದ ಮಕ್ಕಳನ್ನು ಸ್ಥಳೀಯರು ಕೂಡಲೇ ಆಸ್ಪತ್ರೆ ದಾಖಲಿಸಿದ್ದರು. ಆದ್ರೆ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا