Urdu   /   English   /   Nawayathi

ಬಂಡಿಪುರ ಧಗ-ಧಗ: ನಿಯಂತ್ರಣಕ್ಕೆ ಸಿಗದ ಬೆಂಕಿ

share with us

ಚಾಮರಾಜನಗರ: 23 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಶುಕ್ರವಾರ ಸಂಜೆ ಕಾಣಿಸಿಕೊಂಡ ಗೋಪಾಲಸ್ವಾಮಿ ಬೆಟ್ಟ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಬೆಂಕಿ ಸಾವಿರಾರು ಎಕರೆ ಸುಟ್ಟು ರಾ.ಹೆದ್ದಾರಿಯನ್ನು ದಾಟಿದೆ ಎಂದು ಸ್ಥಳೀಯ ಮೂಲಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿವೆ. ಬಂಡಿಪುರದ ಮೇಲುಕಾಮನಹಳ್ಳಿ, ಮಂಗಲ, ಜಕ್ಕಹಳ್ಳಿ  ಪ್ರದೇಶಕ್ಕೆ  ಬೆಂಕಿ ವ್ಯಾಪಿಸಿದ್ದು ದಟ್ಟ ಹೊಗೆ ಕಾಡನ್ನು ಆವರಿಸಿದೆ. ಬೆಂಕಿಯಿಂದಾಗಿ ರಾಷ್ಟ್ರೀಯ ಹೆದ್ದಾರಿ 67 ರ ಮೂಲಕ ಊಟಿಗೆ ತೆರಳುವ ಮಾರ್ಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಮೇಲುಕಾಮನಹಳ್ಳಿ ಹಾಗೂ ಕೇರಳ ಗಡಿಯಲ್ಲೇ ಅತ್ತ ಕಡೆಯ ವಾಹನಗಳನ್ನು ತಡೆ ಹಿಡಿಯಲಾಗಿತ್ತು. ಆದರೆ ಸದ್ಯ ಗುಂಡ್ಲುಪೇಟೆ-ಊಟಿ ರಾ.ಹೆದ್ದಾರಿ ಬಂದ್ ತೆರವುಗೊಳಿಸಲಾಗಿದೆ. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದು ಎರಡು ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ವಿಫಲವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ದಿಕ್ಕು ತೋಚದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಒಟ್ಟಿನಲ್ಲಿ ಬೆಂಕಿಯ ಕೆನ್ನಾಲಿಗೆಯ ರೌದ್ರ ನರ್ತನಕ್ಕೆ ಜೀವ ಸಂಕುಲ ಅಪಾಯದಲ್ಲಿ ಸಿಲುಕಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا