Urdu   /   English   /   Nawayathi

ಬೆಳ್ತಂಗಡಿಯಲ್ಲಿ ವಿದ್ಯುತ್ ಅವಘಡ: ಓರ್ವ ಸಾವು, ಮತ್ತೊರ್ವನ ಸ್ಥಿತಿ ಗಂಭೀರ

share with us

ಮಂಗಳೂರು: 20 ಜನುವರಿ (ಫಿಕ್ರೋಖಬರ್ ಸುದ್ದಿ) ಕೇಬಲ್ ಲೈನ್​​ಗಾಗಿ ಕ್ರೇನ್ ಮೂಲಕ ಕಂಬ ಹಾಕುವಾಗ ವಿದ್ಯುತ್ ತಂತಿ ತಗುಲಿ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ ಕಾಂತರಾಜು (24)  ಮೃತ ಯುವಕ. ಶೇಷಾದ್ರಿ ಕುಮಾರ್ (25) ಗಂಭೀರವಾಗಿ ಗಾಯಗೊಂಡಿದ್ದಾನೆ. ಇವರಿಬ್ಬರು ಹಾಸನ ಜಿಲ್ಲೆಯ ಕುಣಿಗಲ್ ನಿವಾಸಿಗಳು ಎಂದು ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಹೈಸ್ಕೂಲ್ ಹಿಂಭಾಗದ ಸೂರ್ಯ ದೇವಸ್ಥಾನಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ನೆರಿಯ ವಿದ್ಯುತ್ ಸ್ಥಾವರದಿಂದ ಗುರುವಾಯನಕೆರೆ ವಿದ್ಯುತ್ ಕೇಂದ್ರದಲ್ಲಿರುವ ಯೆನಪೊವಾ ಸಂಸ್ಥೆಯ ಪವರ್ ಪಾಯಿಂಟ್​​ ಬಳಿ ಕ್ರೇನ್ ಮೂಲಕ ಕೇಬಲ್ ತಂತಿಗೆ ಕಂಬ ಹಾಕುವ ಕೆಲಸ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯೊಂದರ 33,000 ಹೈವೋಲ್ಟೇಜ್​ ವಿದ್ಯುತ್ ತಂತಿಗೆ ಕಂಬ ಆಕಸ್ಮಿಕವಾಗಿ ತಾಗಿದೆ. ಆಗ ಕಂಬವನ್ನು‌ ಹಿಡಿದುಕೊಂಡಿದ್ದ ಕಾಂತರಾಜು ಸ್ಥಳದಲ್ಲೇ ಮೃತಪಟ್ಟರೆ, ಶೇಷಾದ್ರಿ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾನೆ. 

ಈ ಸಂದರ್ಭ ಕ್ರೇನ್ ಆಪರೇಟರ್ ತಕ್ಷಣ ಹೊರ ಹಾರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಅವಘಡದಲ್ಲಿ ಕ್ರೇನ್​​ನ ಎಲ್ಲಾ ಚಕ್ರಗಳು ಸ್ಫೋಟಗೊಂಡಿವೆ. ಸೂಕ್ತ ಮುಂಜಾಗ್ರತಾ ಕ್ರಮ ವಹಿಸದ ಸಂಸ್ಥೆಯ ಬೇಜವಾಬ್ದಾರಿಯಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا