Urdu   /   English   /   Nawayathi

ಪೊಲೀಸರು ನಿಮ್ಮ ಕಾಲು ಮುರಿಯುತ್ತಾರೆ: ಅಪರಾಧಿಗಳಿಗೆ ಗೃಹ ಸಚಿವರ ಎಚ್ಚರಿಕೆ

share with us

ಬೆಂಗಳೂರು: 16 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಸರಿಯಾದ ರೀತಿ ಒಳ್ಳೆಯ ದಾರಿಯಲ್ಲಿ ನಡೆಯದಿದ್ದರೇ ಪೊಲೀಸರು ನಿಮ್ಮ ಕಾಲು ಮುರಿಯುತ್ತಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಸ್ಟೇಷನ್ ನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ, ಪರಮೇಶ್ವರ್ ಅಪರಾಧಿಗಳನ್ನು ಬೆಳೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದರೇ ಅಂಥವರನ್ನು ಪೊಲೀಸರು ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. 

ಪೊಲೀಸರ ಮಾರ್ಗದರ್ಶನದಲ್ಲಿ  ಸರಿಯಾಗಿ ನಡೆಯದಿದ್ದರೇ ಅವರ ಕಾಲಿಗೆ ಶೂಟ್ ಮಾಡಿಲಿದ್ದಾರೆ. ಕೋರ್ಟ್ ಗೆ ಮತ್ತು ಜೈಲ್ ಗೆ ಹೋಗುವಾಗ ಆ ನೋವು ಅವರ ಜೊತೆಯಲ್ಲಿರುತ್ತದೆ, ಪೊಲೀಸರಲ್ಲಿ ಶಿಸ್ತು ಕಡಿಮೆಯಾಗುತ್ತಿದ್ದು ಹಿರಿಯ ಪೊಲೀಸರು ಈ ಸಂಬಂಧ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا