Urdu   /   English   /   Nawayathi

ಗಾಂಜಾ ಕೇಸ್‌ : ನಿತ್ಯಾನಂದ ಸ್ವಾಮಿಗೆ ಸಿಸಿಬಿ ಪೊಲೀಸರಿಂದ ನೋಟಿಸ್‌

share with us

ಬಿಡದಿ: 15 ನವೆಂಬರ್ (ಫಿಕ್ರೋಖಬರ್ ಸುದ್ದಿ) ಮಾದಕ ವಸ್ತು ಸೇವಿಸುವಂತೆ ಪ್ರಚೋದನಕಾರಿ ಪ್ರವಚನ ಮಾಡಿದ ವೈರಲ್‌ ವಿಡಿಯೋಗೆ ಸಂಬಂಧಿಸಿ ಬಿಡದಿ ಧ್ಯಾನಪೀಠದ ವಿವಾದಿತ ನಿತ್ಯಾನಂದ ಸ್ವಾಮೀಜಿಗೆ ಸಿಸಿಬಿ ಪೊಲೀಸರು ನೋಟಿಸ್‌ ನೀಡಿದ್ದಾರೆ. ನಿತ್ಯಾನಂದ ಸ್ವಾಮಿ ಭಕ್ತರ ಎದುರು ಪ್ರವಚನ ಮಾಡುವ ವೇಳೆ ಮದ್ಯ ಸೇವಿಸಬೇಡಿ ಗಾಂಜಾ ಸೇವಿಸಿ ಯಾವುದೇ ತೊಂದರೆಗಳಾಗುವುದಿಲ್ಲ, ಮನಸ್ಸು ಉಲ್ಲಸಿತವಾಗುತ್ತದೆ, ದೇಹದೊಳಗಿರುವ ನೈಜ ಶಕ್ತಿ ಹೊರ ಬರುತ್ತದೆ ಎಂದಿದ್ದರು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು.

ವಿಡಿಯೋ ವಿರುದ್ಧ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಸಿಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿತ್ಯಾನಂದ ಸ್ವಾಮಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا