Urdu   /   English   /   Nawayathi

ಬಿಎಸ್‌ವೈ ಮತ್ತೆ ಸಿಎಂ ಆಗ್ತಾರೆ

share with us

ಮಂಡ್ಯ: 21 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ದೇವೇಗೌಡ ಹಾಗೂ ಸಿದ್ದರಾಮಯ್ಯನವರು ಅಕ್ಕ-ಪಕ್ಕ ಕುಳಿತಾಕ್ಷಣ ಇಬ್ಬರ ಮನಸ್ಸು ಒಂದಾಗಿದೆ ಎಂದು ಹೇಳಲಾಗದು. ಇದಕ್ಕೆಲ್ಲಾ ಜನ ಮರುಳಾಗುವುದಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ತಿಳಿಸಿದರು. ನಗರದಲ್ಲಿ ಶನಿವಾರ ಬಿಜೆಪಿ ಪರ ಅವರು ಪ್ರಚಾರ ನಡೆಸಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಹಗಲುಗನಸು.

ಅವರ ನಿರೀಕ್ಷೆಗಳೆಲ್ಲಾ ಹುಸಿಯಾಗುತ್ತಿವೆ ಎಂಬ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿ, ಅವರಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋಲ್ಲ ಅಂತಿದ್ರು. ಈಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿಲ್ಲವೇ. ಅದೇ ರೀತಿ ಯಡಿಯೂರಪ್ಪನವರೂ ಮುಖ್ಯಮಂತ್ರಿ ಆಗೇ ಆಗ್ತಾರೆ ಎಂದು ಖಡಕ್ಕಾಗಿ ಉತ್ತರಿಸಿದರು.

ದೇವೇಗೌಡ ಹಾಗೂ ಸಿದ್ದರಾಮಯ್ಯನವರು ಅಕ್ಕ-ಪಕ್ಕ ಕುಳಿತಾಕ್ಷಣ ಇಬ್ಬರ ಮನಸ್ಸು ಒಂದಾಗಿದೆ ಎಂದು ಹೇಳಲಾಗದು. ಹೊರಗಿನ ಅವರ ತೋರಿಕೆಯೇ ಬೇರೆ. ಅಂತರಂಗದಲ್ಲಿರುವ ಮತ್ಸರವೇ ಬೇರೆ. ಜನರನ್ನು ನಂಬಿಸಲು ಈ ರೀತಿ ನಾಟಕವಾಡುತ್ತಿದ್ದಾರೆ. ಇದಕ್ಕೆಲ್ಲಾ ಜನರು ಮರುಳಾಗುವುದಿಲ್ಲ. ಎಲ್ಲೆಡೆ ಮೋದಿ ಅಲೆ ಎದ್ದಿದೆ. ಈಗಷ್ಟೇ ಅಲ್ಲ, ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿಯೂ ರಾಜ್ಯದಲ್ಲಿ 18 ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا