Urdu   /   English   /   Nawayathi

ಪೊಲೀಸ್‌ ಮೇಲೆ ದಾಳಿ: ಬಿಜೆಪಿ ಕೌನ್ಸಿಲರ್ ವಿರುದ್ಧ ಪ್ರಕರಣ

share with us

ಮೀರತ್: 21 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಪೊಲೀಸ್ ಸಬ್ಇನ್‌ಸ್ಪೆಕ್ಟರ್ ಹಾಗೂ ಅವರ ಸ್ನೇಹಿತೆ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಬಿಜೆಪಿ ಕೌನ್ಸಿಲರ್‌ ಮುನಿಷ್ ಚೌಧರಿ ವಿರುದ್ಧ ಪ್ರಕರಣ ದಾಖಲಾಗಿದೆ. ಮೊಹಿಯುದ್ದಿನ್‌ಪುರ ಪೊಲೀಸ್‌ ಚೌಕಿ ಉಸ್ತುವಾರಿ ಸುಖಪಾಲ್ ಸಿಂಗ್ ಪವಾರ್ ಹಾಗೂ ವಕೀಲೆಯಾಗಿರುವ ಅವರ ಸ್ನೇಹಿತೆ ಶುಕ್ರವಾರ ಸಂಜೆ, ಚೌಧರಿ ಮಾಲೀಕತ್ವದ ರೆಸ್ಟೊರೆಂಟ್‌ಗೆ ತೆರಳಿದ್ದರು. 

‘ತಾವು ಆರ್ಡರ್ ಮಾಡಿದ್ದ ಆಹಾರ ಸಮಯಕ್ಕೆ ಸರಿಯಾಗಿ ದೊರೆಯಲಿಲ್ಲ ಎಂದು ಅಸಮಾಧಾನಗೊಂಡ ಸ್ನೇಹಿತೆ ಆಹಾರ ಎಸೆದರು. ಇದನ್ನು ಪ್ರತಿಭಟಿಸಿದ ಚೌಧರಿ, ಪವಾರ್ ಹಾಗೂ ಸ್ನೇಹಿತೆ ಜತೆ ವಾಗ್ವಾದಕ್ಕಿಳಿದರು. ಬಳಿಕ ಪವಾರ್ ಮೇಲೆ ಹಲ್ಲೆ ಮಾಡಿದರು ಎನ್ನುವ ಆರೋಪ ಇದೆ’ ಎಂದು ದೌರಾಲಾ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಬಿಜೆಪಿ ಕೌನ್ಸಿಲರ್ ತಮಗೆ ಶೋಷಣೆ ನೀಡಿ ಹಲ್ಲೆ ಮಾಡಿದ್ದಾರೆ ಎಂದು ವಕೀಲೆ ಆರೋಪಿಸಿದ ಬಳಿಕ, ಕೌನ್ಸಿಲರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪವಾರ್ ಹಾಗೂ ಸ್ನೇಹಿತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವರ ರಕ್ತದಲ್ಲಿ ಮದ್ಯದ ಅಂಶ ಇರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا