Urdu   /   English   /   Nawayathi

ಮಂಗಳೂರು: ಕಾಣೆಯಾಗಿದ್ದ ವ್ಯಕ್ತಿಯ ಶವ ತಮಿಳುನಾಡಿನಲ್ಲಿ ಪತ್ತೆ

share with us

ಮಂಗಳೂರು:  24 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಪ್ರೇಯಸಿ ಜೊತೆ ನಗರದಿಂದ ಕಾಣೆಯಾಗಿದ್ದ ವ್ಯಕ್ತಿಯ ಶವ ತಮಿಳುನಾಡಿನಲ್ಲಿ ಪತ್ತೆಯಾಗಿದೆ. ತಮಿಳುನಾಡಿನ ತೆನಿ ಜಿಲ್ಲೆಯಲ್ಲಿ ಬಜ್ಪೆ ಪೊಲೀಸರು ಶವವನ್ನು ಗುರುತಿಸಿದ್ದಾರೆ. ಮೃತ ವ್ಯಕ್ತಿ 35 ವರ್ಷದ ಮೊಹಮ್ಮದ್ ಸಮೀರ್ ಆಗಿದ್ದು ಈತ ಮಂಗಳೂರಿ ಸಮೀಪ ಯಡಪದವಿನ ಗಂಜಿಮಠದ ಬಡಗುಳಿಪಾಡಿಯ ನಿವಾಸಿಯಾಗಿದ್ದ. ಗಲ್ಫ್ ನಿಂದ ಕಳೆದ ತಿಂಗಳು ರಜೆಯಲ್ಲಿ ಬಂದಿದ್ದ ಈತ ತನ್ನ ಪತ್ನಿ ಮತ್ತು ಮಗನನ್ನು ಕರೆದುಕೊಂಡು ಕಳೆದ ಆಗಸ್ಟ್ 13ರಂದು ಬೆಂಗಳೂರಿಗೆ ಹೋಗಿದ್ದ ಎಂದು ಬಜ್ಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪರಶಿವ ಮೂರ್ತಿ ತಿಳಿಸಿದ್ದಾರೆ.

5 ದಿನ ಕಳೆದ ನಂತರ ಆಗಸ್ಟ್ 18ರಂದು ಸಮೀರ್ ನ ಪತ್ನಿ 28 ವರ್ಷದ ಫಿರ್ಡೌಸ್ ಕಾಪುವಿನಲ್ಲಿರುವ ತನ್ನ ಮನೆಗೆ ವಾಪಸ್ಸಾದಳು. ತನ್ನ ಪತಿ ತನ್ನನ್ನು ಇಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಹೇಳುತ್ತಿದ್ದಳು. ಒಂದು ದಿನ ಕಳೆದ ನಂತರ ಕಾಪುವಿನಲ್ಲಿ ತನ್ನ ಪೋಷಕರ ಮನೆಯಲ್ಲಿ ಮಗುವನ್ನು ಬಿಟ್ಟು ಫಿರ್ಡೌಸ್ ಕೂಡ ಕಾಣೆಯಾದಳು. ಎರಡು ದಿನ ಕಳೆದ ನಂತರ ತಮ್ಮ ಮಗ ಮತ್ತು ಸೊಸೆ ಕಾಣೆಯಾಗಿದ್ದಾರೆ ಎಂದು ಮೊಹಮ್ಮದ್ ಸಮೀರ್ ನ ತಂದೆ ಅಹ್ಮದ್ ಸಾಹೆಬ್ ಸೆಪ್ಟೆಂಬರ್ 20ರಂದು ಪೊಲೀಸರಿಗೆ ದೂರು ನೀಡಿದ್ದರು.

ಮರುದಿನ ಸಮೀರ್ ಕುಟುಂಬಸ್ಥರು ಮತ್ತು ತನಿಖಾಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಿತು. ಅಲ್ಲಿ ಸಮೀರ್ ನ ಮೊಬೈಲ್ ಸಂಪರ್ಕ ತಮಿಳುನಾಡಿನ ತೆನಿ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಗುರುತು ಹಿಡಿದರು. ತಮಿಳುನಾಡಿನ ಕೃಷ್ಣಗಿರಿ ವ್ಯಾಪ್ತಿಯಲ್ಲಿ ಜಿಲ್ಲಾ ಅಪರಾಧ ದಾಖಲೆ ವಿಭಾಗಕ್ಕೆ ಪೊಲೀಸರ ತಂಡ ಭೇಟಿ ನೀಡಿದಾಗ ಸೆಪ್ಟೆಂಬರ್ 19ರಂದು ಕೊಲೆ ಕೇಸು ವರದಿ ಬಂದಿರುವುದು ಗೊತ್ತಾಯಿತು. ಸಮೀರ್ ಧರಿಸಿದ್ದ ಬಟ್ಟೆಯ ಸಹಾಯದಿಂದ ಅದು ಆತನದ್ದೇ ಮೃತದೇಹ ಎಂದು ಪೊಲೀಸರು ಪತ್ತೆಹಚ್ಚಿದರು.

 ಸಮೀರ್ ಕಾಪುವಿಗೆ ಭೇಟಿ ನೀಡಿದ್ದ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಇದೀಗ ತಮಿಳುನಾಡು ಪೊಲೀಸರ ಸಹಾಯದಿಂದ ಪೊಲೀಸರು ಸಮೀರ್ ಪತ್ನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا