Urdu   /   English   /   Nawayathi

ಬೆಂಗಳೂರಿನಲ್ಲಿ ಕುಂದಾಪುರದ ಉದ್ಯಮಿಯೊಬ್ಬನ ಕೊಲೆ

share with us

ಕುಂದಾಪುರ: 23 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಬೆಂಗಳೂರಿನ ಗಾಂಧಿನಗರದ ಹೋಟೇಲ್ ಉದ್ಯಮಿಯೊಬ್ಬನನ್ನು ಪತ್ನಿ ಮತ್ತು ಕುಟುಂಬದ ಸ್ನೇಹಿತ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕೊಲೆ ಬೆಂಗಳೂರಿನ ಶೇಷಾದ್ರಿಪುರದಲ್ಲಿ ನಡೆದಿದ್ದು, ಕೊಲೆಯಾದ ವ್ಯಕ್ತಿ ಕುಂದಾಪುರದ ಸಂತೋಷ್ ಶೆಟ್ಟಿ(56) ಎಂದು ಗುರುತಿಸಲಾಗಿದೆ. ಕೊಲೆಯಲ್ಲಿ ಶಾಮೀಲಾಗಿದ್ದ ಪತ್ನಿ ಅನ್ನಪೂರ್ಣೇಶ್ವರ ಶೆಟ್ಟಿ(44) ಹಾಗೂ ಕುಟುಂಬದ ಸ್ನೇಹಿತ ಪ್ರಕಾಶ್(24) ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ. ಆರೋಪಿಗಳು ಸಂತೋಷ್ ಅವರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ, ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆಯ ನಂತರ ಯಾರಿಗೂ ಅನುಮಾನ ಬರದಿರಲಿ ಎಂದು ಸಂತೋಷ್ ಅವರನ್ನು ಅವರ ಸ್ನೇಹಿತ ಪ್ರಕಾಶನೇ ಅಪೋಲೋ ಆಸ್ಪತ್ರೆಗೆ ಸೇರಿಸಿ, ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. ಸಂತೋಷ್ ಮತ್ತು ಅವರ ಪತ್ನಿ ಇಬ್ಬರೂ ಸೇರಿ ಬೆಂಗಳೂರಿನಿಲ್ಲಿ “ಮಹಾಲಕ್ಷಿ ಸೆಲ್ಫ್ ಸರ್ವಿಸ್” ಎಂಬ ಹೋಟೇಲ್ ನಡೆಸುತ್ತಿದ್ದು, ಪ್ರಕಾಶ್ ಅನ್ನಪೂರ್ಣೇಶ್ವರಿಯವರ ತಂದೆಯ ಪರಿಚಯದವನಾಗಿದ್ದು, ಅನ್ನಪೂರ್ಣೇಶ್ವರಿಯವರ ಆತ್ಮೀಯವಾಗಿದ್ದ ಎಂದು ಹೇಳಲಾಗಿದೆ. ಇಬ್ಬರೂ ಸೇರಿ ಸಂತೋಷ್ ಮನೆಗೆ ಬಂದಾಗ ಅವನ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ಪೋಲೀಸರು ಇಬ್ಬರನ್ನು ವಿಚಾರಿಸಿದಾಗ ಪತ್ನಿ ಅನ್ನಪೂರ್ಣೇಶ್ವರಿಯವರು ನನ್ನ ಪತಿ ಪ್ರತಿದಿನ ಕುಡಿದು ಬಂದು ನನ್ನ ಮೇಳೆ ಹಲ್ಲೆ ನಡೆಸುತ್ತಿದ್ದರು. ಎಂದಿನಂತೆ ಗುರುವಾರದಂದು ರಾತ್ರಿ ಕುಡಿದು ಬಂದು ನನ್ನ ಮೇಲೆ ಹಲ್ಲೆ ನಡೆಸುವಾಗ ನಾನು ಆತ್ಮ ರಕ್ಷಣೆಗಾಗಿ ಅವರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ತಲೆಗೆ ಮರದ ದೊಣ್ಣೆಯಿಂದ ಹೊಡೆದಿದ್ದೇನೆ ಎಂದು ಹೇಳಿದ್ದಾರೆ. ಪೋಲೀಸರು ಇವರ ಕಥೆ ಕೇಳಿ ತನಿಖೆ ಮುಂದುವರಿಸಿದಾಗ ಸಂತೋಷ್ ಮನೆಗೆ ಬರುವ ಮುನ್ನ ಪ್ರಕಾಶ್ ಮನೆಯಲ್ಲಿಯೇ ಇದ್ದ ಎಂದು ತಿಳಿದು ಬಂದಿದ್ದು, ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا