Urdu   /   English   /   Nawayathi

ಹೆಲಿಕಾಪ್ಟರ್‌ನಲ್ಲಿ ಪತ್ರಿಕೆ ಓದಿದ ಪ್ರಕರಣ: ಬಿಜೆಪಿಯಿಂದ ಹಾದಿ ತಪ್ಪಿಸುವ ಯತ್ನ ಎಂದ ಎಚ್‌ಡಿಕೆ

share with us

ಬೆಂಗಳೂರು: 21 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಕೊಡಗು ಪ್ರವಾಹ ಮತ್ತು ಭೂಕುಸಿತದ ಹಾನಿಯ ವೈಮಾನಿಕ ಸಮೀಕ್ಷೆ ವೇಳೆ ಪತ್ರಿಕೆ ಓದುತ್ತಿದ್ದರೆಂಬ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇದು ಜನತೆಯ ಹಾದಿ ತಪ್ಪಿಸುವ ವೀಡಿಯೋ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಬಿಜೆಪಿಯ ಸಾಮಾಜಿಕ ಮಾಧ್ಯಮ ಘಟಕದ ಸಂಚಾಲಕ ಬಾಲಾಜಿ ಶ್ರೀನಿವಾಸ್‌ ಅವರು ಮೊದಲಿಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ವೀಡಿಯೋವನ್ನು ಪ್ರಕಟಿಸಿದ್ದರು. ಜತೆಗೆ ತಮ್ಮ ಫೇಸ್‌ಬುಕ್‌ ಪುಟದಲ್ಲೂ ಪ್ರಕಟಿಸಿದ್ದರು. ಒಟ್ಟಾರೆಯಾಗಿ ಈ ವೀಡಿಯೋ 9,000ಕ್ಕೂ ಅಧಿಕ ಶೇರ್‌ಗಳಾಗಿದ್ದು, ವ್ಯಾಪಕ ಸಂಚಲನ ಉಂಟುಮಾಡಿತ್ತು. 

"ನೆರೆ ಪರಿಸ್ಥಿತಿ ವೀಕ್ಷಣೆ ವೇಳೆ ಮೈಸೂರಿನಿಂದ ಪಿರಿಯಾಪಟ್ಟಣದ ವರೆಗೆ ಹೋಗುವಾಗ ಪೇಪರ್‌ ಓದುತ್ತಿದ್ದೆ. ಈ ಪ್ರದೇಶದಲ್ಲಿ ಪ್ರವಾಹವೇನೂ ಇಲ್ಲ. ಬಿಜೆಪಿಯವರು ಇಲ್ಲದ ಆರೋಪ ಹೊರಿಸುತ್ತಿದ್ದಾರೆ. ಅವರಿಗೆ ಅದೇ ಕೆಲಸವಾಗಿದೆ." -- ಎಚ್‌.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿಗಳು

'ನೆರೆ ಪರಿಸ್ಥಿತಿ ವೀಕ್ಷಣೆ ವೇಳೆ ಮೈಸೂರಿನಿಂದ ಪಿರಿಯಾಪಟ್ಟಣದ ವರೆಗೆ ಹೋಗುವಾಗ ಪೇಪರ್‌ ಓದುತ್ತಿದ್ದೆ. ಈ ಪ್ರದೇಶದಲ್ಲಿ ಪ್ರವಾಹವೇನೂ ಇಲ್ಲ. ಬಿಜೆಪಿಯವರು ಇಲ್ಲದ ಆರೋಪ ಹೊರಿಸುತ್ತಿದ್ದಾರೆ. ಅವರಿಗೇ ಅದೇ ಕೆಲಸವಾಗಿದೆ,' ಎಂದು ಸಿಎಂ ಆಕ್ಷೇಪಿಸಿದ್ದಾರೆ. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا