Urdu   /   English   /   Nawayathi

ವ್ಯಕ್ತಿಯೊಬ್ಬನನ್ನು ಕೊಂದು ಶವವನ್ನು ಛಿದ್ರಗೊಳಿಸಿದ ಬೀದಿ ನಾಯಿಗಳು 

share with us

ಕಾರವಾರ: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಕಾರವಾರದ ನಂದನಗದ್ದೆಯಲ್ಲಿ ವ್ಯಕ್ತಿಯೊಬ್ಬನನ್ನು ಬೀದಿ ನಾಯಿಗಳು ಗುಂಪಾಗಿ ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತಪಟ್ಟ ವ್ಯಕ್ತಿ ದೀಪಕ್ ಶಾಣೆ ನಾಯ್ಕ್(30) ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ದೀಪಕ್ ಭಾನುವಾರದಂದು ರಾತ್ರಿ ನಂದನಗದ್ದೆಯಲ್ಲಿರುವ ಸ್ಮಶಾನದಲ್ಲಿ ಶೌಚಕ್ಕೆಂದು ಹೋದ ವೇಳೆ ಅಲ್ಲಿದ್ದ ಬೀದಿ ನಾಯಿಗಳ ಗುಂಪೊಂದು ಇವರ ಮೇಳೆ ದಾಳಿ ನಡಿಸಿದಾಗ ದೀಪಕ್ ಪ್ರಾಣ ಉಳಿಸಲು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದರೂ ಬಿಡದ ನಾಯಿಗಳು ಇವರನ್ನು ಕೊಂದು ಶವವನ್ನು ಛಿದ್ರಗೊಳಿಸಿವೆ ಎಂದು ಹೇಳಲಾಗಿದೆ. ಕೆಲವು ದಿನಗಳಿಂದ ರಾತ್ರಿಯ ವೇಳೆ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಆದ ಕಾರಣ ಸ್ಥಳೀಯರು ನಗರಸಭೆಯ ಅಧಿಕಾರಿಗಳ ಮೇಲೆ ತೀವ್ರ ಕೋಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا