Urdu   /   English   /   Nawayathi

ಮಳೆಯ ರೌದ್ರಾವತಾರ;ಪ್ರಕೃತಿ ಸೌಂದರ್ಯದ ಬಿಸಿಲೆ ಘಾಟ್ ರಸ್ತೆಯೇ ನಾಶ!

share with us

ಹಾಸನ: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಮಳೆಯ ರೌದ್ರಾವತಾರಕ್ಕೆ ನಿಸರ್ಗದ ಸೌಂದರ್ಯದ ಸ್ವರ್ಗವೇ ಆಗಿದ್ದ ಬಿಸಿಲೆ ಘಾಟ್ ನಲ್ಲೂ ಜಲಪ್ರಳಯ ಸಂಭವಿಸಿದೆ. ಅಷ್ಟೇ ಅಲ್ಲ ಮಹಾಮಳೆಗೆ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಕೊಂಡು ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಬೆಟ್ಟವೇ ಒಡೆದು ಮರಗಳ ಸಹಿತ ನೀರು ಹರಿದು ಬಂದ ಪರಿಣಾಮ ಬಿಸಿಲೆ ಘಾಟ್ ರಸ್ತೆ ಕೊಚ್ಚಿಕೊಂಡು ಹೋಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಮಳೆಯ ರಭಸಕ್ಕೆ ಹಾಸನ ಜಿಲ್ಲೆಯ ಸಕಲೇಪುರ ತಾಲೂಕಿನಲ್ಲಿ 15 ದಿನದ ಹಿಂದೆ ಉದ್ಘಾಟನೆಯಾಗಿದ್ದ 7 ಕಿಮೀ ಕಾಂಕ್ರೀಟ್ ರಸ್ತೆ ಸಂಪೂರ್ಣ ನಾಶವಾಗಿಹೋಗಿದೆ. ಬೆಟ್ಟದ ಮೇಲೆ ಸಣ್ಣ ತೊರೆಯಂತಿದ್ದ ನದಿ ದೊಡ್ಡ ನದಿಯಾಗಿ ರೂಪಾಂತರಗೊಂಡು ರಸ್ತೆ, ಸೇತುವೆಗಳೆಲ್ಲಾ ಕೊಚ್ಚಿಕೊಂಡು ಹೋಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا