Urdu   /   English   /   Nawayathi

ಮಂಜೇಶ್ವರದಲ್ಲಿ ನಡೆದ ಬರ್ಬರ ಹತ್ಯೆ

share with us

ಮಂಜೇಶ್ವರ: 07 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಭಾನುವಾರದಂದು ರಾತ್ರಿ ಸುಮಾರು 11ಗಂಟೆಗೆ ಮಂಗಲ್ಪಾಡಿಯ ಸೋಂಕಾಲು ಎಂಬಲ್ಲಿ ಸಿ,ಪಿ,ಎಂ ಕಾರ್ಯಕರ್ತನೊಬ್ಬನ ಕೊಲೆ ನಡೆದಿದೆ ಎನ್ನಲಾಗಿದೆ. ಮೃತಮಟ್ಟ ಯುವಕ ಸೋಂಕಾಲುವಿನ ನಿವಾಸಿ ಅಝೀಝ್ ಅವರ ಪುತ್ರ ಅಬೂಬಕರ್ ಸಿದ್ದೀಕ್(21) ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಸಿದ್ದೀಕ್ ರಾತ್ರಿ ಸುಮಾರು 11ಗಂಟೆಗೆ ಮಂಗಲ್ಪಾಡಿಯ ಸೋಂಕಾಲುವಿನ ಬಳಿ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಈತನನ್ನು ಹಿಂಬಾಲಿಸಿ ಬೈಕಿನಲ್ಲಿ ಬಂದ ನಾಲ್ಕು ಜನರ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಸಿದ್ದೀಕಿನ ಕೂಗಿನ ಶಬ್ದ ಕೇಳಿದ ಸ್ಥಳೀಯರು ತಕ್ಷಣ ಸಿದ್ದೀಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಈತ ಮೃತಪಟ್ಟಿದ್ದನು ಎಂದು ಹೇಳಲಾಗಿದೆ. ಕೆಲವು ದಿನಗಳಿಂದ ಸೋಂಕಾಲುವಿನಲ್ಲಿ ರಾತ್ರಿಯ ವೇಳೆ ಅಕ್ರಮವಾಗಿ ಮದ್ಯ ಮಾರಾಟದ ಧಂದೆ ನಡೆಯುತ್ತಿದ್ದು, ಸಿದ್ದೀಕ್ ಇದನ್ನು ವಿರೋಧಿಸಿ ಮಾರಾಟವನ್ನು ನಿಲ್ಲಿಸಲು ಯತ್ನಿಸಿದ ದ್ವೇಶದಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ವಿಷಯ ತಿಳಿದ ಮಂಜೇಶ್ವರದ ಪೋಲೀಸರು ತಮ್ಮ ಕಾರ್ಯಾಚರಣೆ ನಡೆಸಿ ಪ್ರಧಾನ ಆರೋಪಿಗಳನ್ನು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಪೋಲೀಸರು ಆರೋಪಿಗಳನ್ನು ಸೋಮವಾರ ಮಧ್ಯಾಹ್ನದಲ್ಲಿ ಬಂಧಿಸಿದ್ದು, ಬಂಧನದಲ್ಲಿರುವವರು ಆರ್,ಎಸ್,ಎಸ್ ಕಾರ್ಯಕರ್ತರಾದ ಉಪ್ಪಳದ ನಿವಾಸಿ ಅಶ್ವಥ್(28) ಹಾಗೂ ಕಾರ್ತಿಕ್(27) ಎಂದು ಗುರುತಿಸಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا