Urdu   /   English   /   Nawayathi

6 ಲಕ್ಷ ರೂ ಬೆಲೆ ಬಾಳುವ ಸಾಗವಾನಿ ಕಟ್ಟಿಗೆ ವಶ

share with us

ಯಲ್ಲಾಪುರ: 19 ಜುಲೈ (ಫಿಕ್ರೋಖಬರ್ ಸುದ್ದಿ) ಯಲ್ಲಾಪುರ ವಿಭಾಗದ ಅರಣ್ಯ ಇಲಾಖೆಯ ತಂಡವೊಂದು ಚಿತ್ರದುರ್ಗ ಪಟ್ಟಣಕ್ಕೆ ತೆರಳಿ ಅಲ್ಲಿನ ನ್ಯಾಷಿನಲ್ ಸಾ-ಮಿಲ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಂಡು ಆರೋಪಿ ಮುಹಮ್ಮದ್ ಹಯಾತ್ ಅಬ್ದುಲ್ ಕರೀಮ್(60) ಎಂಬಾತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ಮಿಲ್ಲಿನ ಮಾಲಕ ಅಬ್ದುಲ್ ಕರೀಮ್ ಶಿರಸಿಯ ನಿವಾಸಿ ಅಬ್ದುಲ್ ಖುದ್ದುಸ್ ಎಂಬಾತನಿಂದ ಕಟ್ಟಿಗೆಯನ್ನು ಖರೀದಿಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದು, ಮಾಹಿತಿ ಪಡೆದ ಅರಣ್ಯ ಇಲಾಖೆಯವರು ಈತನನ್ನು 2.770 ಘನ ಮೀ ಉದ್ದದ 118 ತುಂಡುಗಳು ಸುಮಾರು 6 ಲಕ್ಷ ರೂಪಾಯಿ ಬೆಲೆಬಾಳುವ ಸಾಗವಾನಿ ಕಟ್ಟೆಗೆಯ ಜೊತೆಗೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا