Urdu   /   English   /   Nawayathi

ದರೋಡೆಕೋರರ ಜತೆ ಹೋರಾಡಿ ಓಡಿಸಿದ ಕುಟುಂಬ

share with us

ಬೆಂಗಳೂರು: 19 ಜುಲೈ (ಫಿಕ್ರೋಖಬರ್ ಸುದ್ದಿ) ರಾತ್ರಿ ವೇಳೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಬೆದರಿಸಿದ ಇಬ್ಬರು ದರೋಡೆಕೋರರೊಂದಿಗೆ ದಂಪತಿ ಮತ್ತು ಇಬ್ಬರು ಮಕ್ಕಳು ಹೋರಾಡಿ ಅವರನ್ನು ಹಿಮ್ಮೆಟ್ಟಿಸಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಗೋವಿಂದಶೆಟ್ಟಿ ಪಾಳ್ಯದಲ್ಲಿ ನಡೆದಿದೆ. 
ನಾರಾಯಣ ರೆಡ್ಡಿ (58) ಎಂಬುವರು ತಮ್ಮ ಇಬ್ಬರು ಮಕ್ಕಳು ಹಾಗೂ ಪತ್ನಿಯೊಂದಿಗೆ ಗೋವಿಂದಶೆಟ್ಟಿ ಪಾಳ್ಯದಲ್ಲಿ ವಾಸವಿದ್ದಾರೆ. ಜು.17ರಂದು ರಾತ್ರಿ 11.30ರ ಸುಮಾರಿಗೆ ಅಪರಿಚಿತರು ಬೆಲ್‌ ಮಾಡಿದ್ದರು. ಪತ್ನಿ ವಿಜಯಲಕ್ಷ್ಮೇ ಅವರು ಬಾಗಿಲು ತೆಗೆಯುತ್ತಿದ್ದಂತೆ ಕುತ್ತಿಗೆಗೆ ಚಾಕು ಇಟ್ಟ ವ್ಯಕ್ತಿಯೊಬ್ಬ, ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಹಾಲ್‌ನಲ್ಲಿದ್ದ ಕಿರಿಯ ಮಗ ಪವನ್‌, ಯಾರೆಂದು ನೋಡಲು ಹತ್ತಿರ ಬಂದಾಗ ಜತೆಗಿದ್ದ ಮತ್ತೊಬ್ಬ ವ್ಯಕ್ತಿ ಚಾಕು ತೆಗೆದು ಪವನ್‌ಗೆ ಇರಿಯಲು ಮುಂದಾಗಿದ್ದ. ಅಷ್ಟರಲ್ಲೇ ನಾರಾಯಣ ರೆಡ್ಡಿ ಅವರು ಕೂಡಾ ಬಂದು ತಡೆದಿದ್ದಾರೆ. ಆಗ ದುಷ್ಕರ್ಮಿಯು, ನಾರಾಯಣ ರೆಡ್ಡಿ ಅವರಿಗೂ ಇರಿಯಲು ಯತ್ನಿಸಿದ್ದಾನೆ. 

ತಪ್ಪಿಸಿಕೊಳ್ಳುವ ವೇಳೆ ಮುಖಕ್ಕೆ ಇರಿತವಾಗಿದೆ. ಅಷ್ಟರಲ್ಲೇ ವಿಜಯಲಕ್ಷ್ಮೇ ಅವರು ಮನೆಯಿಂದ ಹೊರಗೆ ಓಡಿ ಬಂದು ಸಹಾಯಕ್ಕಾಗಿ ಕೂಗಾಡಿದ್ದಾರೆ. ಈ ವೇಳೆ ಒಬ್ಬ ದುಷ್ಕರ್ಮಿ ಮನೆಯಿಂದ ತಪ್ಪಿಸಿಕೊಂಡು ಓಡಿದ್ದಾನೆ. ಒಳಗೆ ಇದ್ದ ಒಬ್ಬನನ್ನು ನಾರಾಯಣ ರೆಡ್ಡಿ ಮತ್ತು ಮಕ್ಕಳಾದ ಪವನ್‌ ಮತ್ತು ಚೇತನ್‌ ಹಿಡಿದುಕೊಂಡಿದ್ದರು. ಈ ವೇಳೆ ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯಲ್ಲಿದ್ದ ಟಿಪಾಯಿಯ ಗಾಜಿಗೆ ಗುದ್ದಿದ ದುಷ್ಕರ್ಮಿ, ನಂತರ ಚಾಕು ತೋರಿಸಿ ಬೆದರಿಸಿ ಮನೆಯಿಂದ ಹೊರ ಬಂದು ಚಿಲಕ ಹಾಕಿಕೊಂಡು ಪರಾರಿಯಾಗಿದ್ದಾನೆ. 

ಗಾಯಾಳು ನಾರಾಯಣ ರೆಡ್ಡಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದರೋಡೆ ಉದ್ದೇಶದಿಂದ ಮನೆಗೆ ನುಗ್ಗಿದ್ದ ದರೋಡೆಕೋರರ ವಯಸ್ಸು ಸುಮಾರು 22ರಿಂದ 25 ಇರಬಹುದು ಎಂದು ದೂರಿನಲ್ಲಿ ನಾರಾಯಣ ರೆಡ್ಡಿ ತಿಳಿಸಿದ್ದಾರೆ. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا