Urdu   /   English   /   Nawayathi

ವ್ಯಕ್ತಿ ಕಾವೇರಿ ಪಾಲು, ಮರ ಬಿದ್ದು ಇಬ್ಬರ ಸಾವು

share with us

ಬೆಂಗಳೂರು: 15 ಜುಲೈ (ಫಿಕ್ರೋಖಬರ್ ಸುದ್ದಿ) ರಾಜ್ಯದ ಮಲೆನಾಡು, ಕರಾವಳಿ ಭಾಗಗಳಲ್ಲಿ ಮಳೆಯ ಅಬ್ಬರಕ್ಕೆ ಕಡಲ್ಕೊರೆತ, ಭೂಕುಸಿತ, ರಸ್ತೆ, ಸೇತುವೆ ಜಲಾವೃತ, ಧರೆಗುರುಳಿದ ಮರಗಳು, ಸಂಚಾರ ಬಂದ್‌ನಂಥ ಘಟನೆಗಳು ನಡೆದಿವೆ. 
ರಂಗನತಿಟ್ಟು ಪಕ್ಷಿಧಾಮ ಬಳಿ ಶನಿವಾರ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿದ್ದು, ಮತ್ತೊಬ್ಬನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ 20 ಸಾವಿರ ಕ್ಯೂಸೆಕ್‌ ನೀರು ಬಿಟ್ಟಿದ್ದರಿಂದ ಏಕಾಏಕಿ ಪ್ರವಾಹ ಉಂಟಾಗಿದ್ದು, ಕೊಚ್ಚಿಹೋದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ, ಅವರ ಬೈಕ್‌ ನದಿ ಮಧ್ಯ ಭಾಗದಲ್ಲಿ ದೊರೆತಿದೆ. ಪಾಂಡವಪುರ ತಾಲೂಕು ಕ್ಯಾತನಹಳ್ಳಿಯ ವೆಂಕಟಯ್ಯರನ್ನು ಮೀನುಗಾರರು ತೆಪ್ಪದಲ್ಲಿ ತೆರಳಿ ಪಾರು ಮಾಡಿದರು. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا