Urdu   /   English   /   Nawayathi

ಬೈಕ್ ಗಳ ಮುಖಾಮುಖಿ ಡಿಕ್ಕಿ ; ಇಬ್ಬರು ದಾರುಣ ಸಾವು, ಇಬ್ಬರ ಸ್ತಿತಿ ಗಂಭೀರ

share with us

ಗುಂಡ್ಲುಪೇಟೆ: 23 ಜೂನ್ (ಫಿಕ್ರೋಖಬರ್ ಸುದ್ದಿ) ಹೀರೋಹೋಂಡ ಮತ್ತು ಪಲ್ಸರ್ ಬೈಕ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತ ಪಟ್ಟು ಮತ್ತಿಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ತಾಲೂಕಿನ ಬರಗಿ ಸಮೀಪ ನಿನ್ನೆ ಸಂಜೆ ಸಂಭವಿಸಿದೆ.
ಈ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವವರನ್ನು ತಾಲೂಕಿನ ತೆಂಕಲಹುಂಡಿಯ ಶೀವೇಗೌಡ ಎಂಬುವರ ಪುತ್ರ ವಿಜಯ ಕುಮಾರ್ ಹಾಗು ಪಟ್ಟಣದ ಗೋವಿಂದ ಶೆಟ್ಟಿ ಪುತ್ರ ಮಹದೇವ್ ಎಂದು ಗುರುತಿಸಲಾಗಿದೆ.
ಮತ್ತಿಬ್ಬರಿಗೆ ಗಂಭೀರವಾದ ಗಾಯವಾಗಿದ್ದು ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಬದಿಯಲ್ಲಿ ಕೂತಿದ್ದ ತೆಂಕಲಹುಂಡಿಯ ಸುರೇಶ್ ಪುತ್ರ ರಮೇಶ್ ಮತ್ತು ಚಿಕ್ಕಮಾದಶೆಟ್ಟರ ಪುತ್ರ ಸಚಿನ್ ತೀವ್ರತರನಾದ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಗಿದ್ದರೆ. ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದ್ದು ಡಿಕ್ಕಿಯಾದ ರಭಸಕ್ಕೆ ಬೈಕ್ ಗಳು ಜಖಂಗೊಂಡಿವೆ.ಹೆಲ್ಮಟ್ ಧರಿಸದಿರುವುದು ಸವಾರರ ಸಾವು ಸಂಭವಿಸಲು ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಗುಂಡ್ಲು ಪೇಟೆಯ ಪಿ ಎಸ್ ಐ ಶಿವರುದ್ರ ಮತ್ತು ಅಪರಾಧ ವಿಭಾಗದ ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا