Urdu   /   English   /   Nawayathi

ಪತ್ನಿ ಕೊಲೆಗೈದು ಮಕ್ಕಳಿಗೆ ಗುಂಡಿಕ್ಕಿದ ಉದ್ಯಮಿ ಸೆರೆ

share with us

ಬೆಂಗಳೂರು: 23 ಜೂನ್ (ಫಿಕ್ರೋಖಬರ್ ಸುದ್ದಿ) ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಗಣೇಶ್ ಇಬ್ಬರು ಮಕ್ಕಳ ಮೇಲೆಯೂ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ ವರದಿಯಾಗಿದೆ.

ಘಟನೆಯಲ್ಲಿ ಮಕ್ಕಳಾದ ದತ್ತು ಪುತ್ರ ಸಿದ್ಧಾರ್ಥ (15) ಹಾಗೂ ಸಾಕ್ಷಿ (9) ಗಾಯಗೊಂಡಿದ್ದಾರೆ. ಸಾಕ್ಷಿಯ ಆರೋಗ್ಯ  ಚಿಂತಾಜನಕವಾಗಿದೆ. ಬೆಳಿಗ್ಗೆ ಮನೆ ಎದುರು ಆಟವಾಡುತ್ತಿದ್ದ ಸಿದ್ಧಾರ್ಥ ಮತ್ತು ಸಾಕ್ಷಿ ಮೇಲೆ ಗುಂಡು ಹಾರಿಸಿದ್ದ ಗಣೇಶ್, ಮಕ್ಕಳು ನೀರಿಗಾಗಿ ಆಕ್ರಂದನಗೈದರೂ ನೀರು ಕೊಡದೆ ಕಾರಿನಲ್ಲಿ ಹತ್ತಿಸಿಕೊಂಡು ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಮಾಹಿತಿ ಅರಿತು ಮಾರ್ಗಮಧ್ಯ ಆತನನ್ನು ಬಂಧಿಸಿದ್ದಾರೆ.

ಜಯನಗರ 4ನೇ ಹಂತದ ನಿವಾಸಿ ಗಣೇಶ್, ರಿಯಲ್ ಎಸ್ಟೇಟ್ ಉದ್ಯಮಿಯಾದ  ಪತ್ನಿ ಕೊಲೆ ಆರೋಪಿ, ಗಣೇಶ್ (45) ಮಕ್ಕಳ ಮೇಲೂ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದು, ಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಗಣೇಶ್ ಗುರುವಾರ ರಾತ್ರಿ ಪತ್ನಿ ಸಹನಾ (42) ಮೇಲೆ ಗುಂಡು ಹಾರಿಸಿ ಕೊಲೆಗೈದ ಬಳಿಕ ತನ್ನ ಮೂವರು ಮಕ್ಕಳ ಸಮೇತ ಪರಾರಿಯಾಗಿದ್ದ. ಶುಕ್ರವಾರ ಬೆಳಿಗ್ಗೆ ಇಬ್ಬರು ಮಕ್ಕಳ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ. ಇನ್ನೊಬ್ಬ  ಅಂಗವಿಕಲ ಮಗ ಸಮೀತ್ (12) ಸುರಕ್ಷಿತವಾಗಿದ್ದಾನೆ. ಈತನ ಬಳಿ ಇದ್ದ ಪರವಾನಿಗೆ ಹೊಂದಿದ್ದ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಸಕಲೇಶಪುರದ ಗಣೇಶ್, 17 ವರ್ಷಗಳ ಹಿಂದೆ ಸಹನಾರನ್ನು ಮದುವೆಯಾಗಿದ್ದ. ಕನಕಪುರದ ಸಮೀಪ ರೆಸಾರ್ಟ್ ನಡೆಸುತ್ತಿದ್ದ ಗಣೇಶ್, ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದು, ಸಾಲಗಾರರ ಕಾಟದಿಂದ ತನ್ನ ಮನೆಯನ್ನು ಮಾರಾಟ ಮಾಡಲು ಮುಂದಾದಾಗ ಅದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದರು. ಗುರುವಾರ ಬೆಳಿಗ್ಗೆ ಮಕ್ಕಳು ಶಾಲೆಗೆ ಹೋಗಿದ್ದ ವೇಳೆಯಲ್ಲಿ  ಪತ್ನಿ ಜತೆ ಮಾತಿಗೆ ಮಾತು ಬೆಳೆದು,  ಗಣೇಶ್, ಪತ್ನಿ ಮೇಲೆ ಮೂರು ಸುತ್ತು ಗುಂಡುಹಾರಿಸಿದ್ದ. ಎದೆಗೆ ಗುಂಡು ತಗುಲಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆ.ಪಿ.ನಗರದಲ್ಲಿರುವ ಸಹನಾ ಪೋಷಕರು ಎಂದಿನಂತೆ ಮಗಳಿಗೆ ಗುರುವಾರ ಕರೆ ಮಾಡಿದಾಗ ಮಗಳು ಸ್ವೀಕರಿಸಿರಲಿಲ್ಲ. ರಾತ್ರಿ 9 ಗಂಟೆಗೆ ಜಯನಗರದ ಮನೆಗೆ ಹೋಗಿ ನೋಡಿದಾಗ ಆಕೆ ಕೊಲೆಯಾಗಿರುವುದು ಗೊತ್ತಾಗಿದೆ.

ಪತ್ನಿ ಕೊಲೆಗೈದ  ಆರೋಪಿ, ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಅಂಚೆಪಾಳ್ಯ ಸಮೀಪದ ತೋಟದ ಮನೆಗೆ ಕರೆದೊಯ್ದು ಅಲ್ಲಿಯೇ ರಾತ್ರಿ ಕಳೆದಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا