Urdu   /   English   /   Nawayathi

ಜೈಲಿನಲ್ಲಿ ಖೈದಿ ಆತ್ಮಹತ್ಯೆ

share with us

ಕಾರವಾರ: 21 ಜೂನ್ (ಫಿಕ್ರೋಖಬರ್ ಸುದ್ದಿ) ಕಾರವಾರದ ಜೈಲಿನಲ್ಲಿ ಕೊಡಗಿನ ಸೋಮವಾರಪೇಟೆಯ ನಿವಾಸಿಯ ಖೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕೊಲೆಯೊಂದು ನಡೆದಿತ್ತು, ಆ ಕೊಲೆಯಲ್ಲಿ ಈತ ಭಾಗಿಯಾಗಿದ್ದ ಎಂಬ ಆರೋಪದಲ್ಲಿ ಈತನಿಗೆ ಬಂಧಿಸಿ ಉಡುಪಿಯ ಜೈಲಿನಲ್ಲಿ ಇರಿಸಲಾಗಿತ್ತು. ಕೆಲವು ದಿನಗಳಿಂದ ಉಡುಪಿ ಜೈಲುಗಳ ಕಟ್ಟಡ ನವೀಕರಣದ ಕೆಲಸ ನಡೆಯುತ್ತಿದ್ದ ಕಾರಣ ಅಲ್ಲಿನ ಖೈದಿಗಳನ್ನು ಕಾರವಾರದ ಜೈಲಿಗೆ ಕಳಿಸಲಾಗಿತ್ತು. ಆ ವೇಳೆ ಖೈದಿ ತನ್ನ ಟವೆಲನ್ನು ಬಳಸಿ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ. ಶವವನ್ನು ಜಿಲ್ಲೆಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا