Urdu   /   English   /   Nawayathi

ಮದ್ರಾಸ್ ಹೈಕೋರ್ಟ್‌ ಮೊರೆ ಹೋದ ಸ್ಟೆರ್‌ಲೈಟ್ ಕಂಪೆನಿ

share with us

ಚೆನ್ನೈ: 20 ಜೂನ್ (ಫಿಕ್ರೋಖಬರ್ ಸುದ್ದಿ) ತೂತುಕುಡಿಯಲ್ಲಿರುವ ವೇದಾಂತ ಸಮುಹದ ಸ್ಟೆರ್‌ಲೈಟ್ ಕಾಪರ್ ಕಂಪನಿ ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದು, ಕಾರ್ಖಾನೆ ನಡೆಸಲು ಅವಶ್ಯಕವಾದ ಮಾನವ ಸಂಪನ್ಮೂಲ ಹಾಗೂ ವಿದ್ಯುತ್ ಸರಬರಾಜು ಮಾಡುವಂತೆ ಮನವಿ ಮಾಡಿದೆ. 

ಕಾರ್ಖಾನೆಯಲ್ಲಿ ಸೋರಿಕೆಯಾಗಿರುವ ಸಾರಜನಕ ಸ್ವಚ್ಛಗೊಳಿಸುವ ಕಾರ್ಯ ಜೂನ್ 18ರಿಂದ ಪ್ರಾರಂಭವಾಗಿದೆ. ಕಾರ್ಖಾನೆಗೆ ಸಿಬ್ಬಂದಿ, ಹಾಗೂ ವಿದ್ಯುತ್  ಅಗತ್ಯತೆ ಇದೆ ಎಂದು ಮಧುರೈ ಪೀಠಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ತೂತುಕುಡಿ ಜಿಲ್ಲಾಧಿಕಾರಿ ಸಂದೀಪ್ ನಂದೂರಿ, ಸ್ಥಳೀಯರ ಸುರಕ್ಷತೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಭರವಸೆ ನೀಡಿದರು.  

ಕಳೆದ ತಿಂಗಳು ಸ್ಟೆರ್‌ಲೈಟ್ ಕಂಪೆನಿ ವಿರುದ್ಧ ಸ್ಥಳಿಯರು ಕೈಗೊಂಡ ಪ್ರತಿಭಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದರು. 

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا