Urdu   /   English   /   Nawayathi

ಬಿಸ್ಕತ್ತು ತರಲು ಹೋಗಿ ಅತ್ಯಾಚಾರಕ್ಕೊಳಗಾದ ಬಾಲಕಿ

share with us

ಭುವನೇಶ್ವರ: 23 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಬಿಸ್ಕತ್ತು ತರಲು ಅಂಗಡಿಗೆ ಹೋದ 6 ವರ್ಷದ ಬಾಲಕಿಯನ್ನು ಶಾಲಾ ಆವರಣಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಕಟರ್ ಜಿಲ್ಲೆಯ ಜಗನ್ನಾಥಪುರ ಗ್ರಾಮದಲ್ಲಿ ನಡೆದಿದೆ. ಬಿಸ್ಕತ್ತು ತರಲು ಅಂಗಡಿಗೆ ಹೋದ ಮಗಳು ಎಷ್ಟು ಹೊತ್ತಾದರೂ ಹಿಂತಿರುಗಿ ಮನೆಗೆ ಬರಲಿಲ್ಲ. ಅದೇ ಸಮಯದಲ್ಲಿ ವಿದ್ಯುತ್ ಕಡಿತ ಸಹ ಆಗಿತ್ತು. ಮಗುವಿಗಾಗಿ ಕುಟುಂಬದವರು ಗ್ರಾಮಸ್ಥರೊಡಗೂಡಿ ಹುಡುಕಾಟ ನಡೆಸಿದರು. ಸುಮಾರು ಒಂದು ಗಂಟೆ ನಂತರ ಗ್ರಾಮದ ಶಾಲಾ ಆವರಣದಲ್ಲಿ ವಿವಸ್ತ್ರವಾಗಿ ಬಿದ್ದಿದ್ದ ಮಗು ಪತ್ತೆಯಾಯಿತು. ಮಗುವಿನ ತಲೆ ಮತ್ತು ಬಾಯಿಯಲ್ಲಿ ರಕ್ತ ಸ್ರಾವವಾಗಿತ್ತು. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಮಗುವಿನ ಮೇಲೆ ಅತ್ಯಾಚಾರ ಅಲ್ಲದೆ, ಹತ್ಯೆಗೂ ಯತ್ನ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ತಾತ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನನು ಪತ್ತೆಹಚ್ಚಿ ಬಂಧಿಸಿದ್ದಾರೆ. 25 ವರ್ಷದ ಯುವಕ ಈ ಕುಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಡಿ.ಕೆ. ಮಲ್ಲಿಕ್ ತಿಳಿಸಿದ್ದಾರೆ.
ಒರಿಸ್ಸಾ, ಆರೋಗ್ಯ ಮಂತ್ರಿ ಪ್ರತಾಪ್ ಜೆನಾ, ಆಸ್ಪತ್ರೆಗೆ ತೆರಳಿ ಕಾಮುಕನಿಗೆ ಬಲಿಯಾದ ಮಗುವಿನ ಆರೋಗ್ಯ ವಿಚಾರಿಸಿದರು. ಬಾಲಕಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا