Urdu   /   English   /   Nawayathi

ಕುಂಪಲ : ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾಕ್ಕೆ ಬೆಂಕಿ

share with us

ಉಳ್ಳಾಲ: 01 ಜನುವರಿ  (ಫಿಕ್ರೋಖಬರ್ ಸುದ್ದಿ) ಕುಂಪಲದ ಕೃಷ್ಣನಗರದ ಬಳಿ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾವೊಂದಕ್ಕೆ ದುಷ್ಕರ್ಮಿಗಳು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆ ಶನಿವಾರ ಮಧ್ಯರಾತ್ರಿ ಸಂಭವಿಸಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣನಗರ ನಿವಾಸಿ ಸ್ಟಾನಿ ಡಿ'ಸೋಜಾ ಅವರು ಶನಿವಾರ ಸಂಜೆ ಮನೆ ಅಂಗಳದಲ್ಲಿ ರಿಕ್ಷಾವನ್ನು ತಂದು ನಿಲ್ಲಿಸಿದ್ದರು. ಮಧ್ಯರಾತ್ರಿ ರಿಕ್ಷಾ ಉರಿಯುತ್ತಿದ್ದುದನ್ನು ಕಂಡ ಮನೆಮಂದಿ ಬೊಬ್ಬಿಟ್ಟಾಗ ಸ್ಥಳೀಯರು ಸೇರಿ ನೀರು ಹಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ.  ಆದರೆ ರಿಕ್ಷಾ ಸಂಪೂರ್ಣ ಸುಟ್ಟುಹೋಗಿದೆ. ಬೆಡ್‌ ಶೀಟನ್ನು ಪೆಟ್ರೋಲ್‌ನಲ್ಲಿ ಮುಳುಗಿಸಿ ಅದಕ್ಕೆ ಬೆಂಕಿ ಹಚ್ಚಿ ರಿಕ್ಷಾ ದೊಳಗೆ ಇರಿಸಲಾಗಿದೆ ಎಂದು ಪೊಲೀ ಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.  ರಿಕ್ಷಾದಲ್ಲಿ ಗ್ಯಾಸ್‌ ಸಿಲಿಂಡರ್‌ ಕೂಡ ಇದ್ದು, ಅದರಲ್ಲಿ ಅನಿಲವಿಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಸ್ಟಾನಿಗೆ ಯಾರಲ್ಲೂ ದ್ವೇಷವಿರಲಿಲ್ಲ. ಸ್ಥಳಕ್ಕೆ ಎಸಿಪಿ ರಾಮ ರಾವ್‌, ಇನ್ಸ್‌ಪೆಕ್ಟರ್‌ ಗೋಪಿಕೃಷ್ಣ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا